`ಕೃಷ್ಣ ರುಕ್ಕು`ನಾಳೆಯಿಂದ ತೆರೆಗೆ
Posted date: 25 Thu, Feb 2016 – 04:53:17 PM

ಶ್ರೀವೆಂಕಟೇಶ್ವರ ಕೃಪ ಎಂಟರಟೈನರ್ ಅರ್ಪಿಸುವ, ವಾಸವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಅವರು ನಿರ್ಮಿಸಿರುವ ಹಾಗೂ ವಾಸವಿ ಮೆಹ್ತಾ ಅವರ ಸಹ ನಿರ್ಮಾಣವಿರುವ  ‘ಕೃಷ್ಣ ರುಕ್ಕು’  ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಅಜಯ್‌ರಾವ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಅಮೂಲ್ಯ. ಶೋಭ್‌ರಾಜ್, ಗಿರಿಜಾಲೋಕೇಶ್, ಲೇಖಾ ಚಂದ್ರ, ಸಿದ್ಧಾರ್ಥ್ ಮಾದ್ಯಮಿಕ, ವಿಜಯ್ ಚಂಡೂರ್, ರಿತೇಶ್, ಸಿದ್ದು, ಲಕ್ಷ್ಮೀ ಸಿದ್ದಯ್ಯ, ಸ್ವಪ್ನರಾಜ್, ಭೂಪಾಲ್, ಪವನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಅನಿಲ್‌ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಜಗದೀಶ್ ವಾಲಿ ಅವರ ಛಾಯಾಗ್ರಹಣವಿದೆ. ಶ್ರೀಧರ್.ವಿ.ಸಂಭ್ರಮ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed